Posts

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

Image
ಭೂಪತಿಯ ಬಾಳಿನ ಕ್ಷಮಯಾಧರಿತ್ರಿ..... ಕಾರ್ಯೇಶು ದಾಸಿ ಕರುಣೇಶು ಮಂತ್ರಿ ಭೋಜೇಶು ಮಾತಾ ಶಯನೇಶು ರಂಭಾ ಕ್ಷಮಯಾಧರಿತ್ರಿ ರೂಪೇಶು ಲಕ್ಷ್ಮಿ ಸತ್ಕರ್ಮಯುಕ್ತ ಕುಲಧರ್ಮ ಪತ್ನಿ ಹೀಗೆ ನಮ್ಮ ಸಂಸ್ಕೃತಿಯಲ್ಲಿ ಶ್ರೇಷ್ಠ ಸ್ತ್ರೀ ಲಕ್ಷಣಗಳ ಬಗ್ಗೆ ವ್ಯಾಖ್ಯಾನಿಸಲಾಗಿದೆ.  ಕವಲೊಡೆದರೆ ಕಾವ್ಯವಾಗುವಳು ಜ್ವಲಿಸಿದರೆ ಝರಿಯಾಗುವಳು ತ್ರಾಸವಾದರೆ ತ್ರಾಹಿಯಾಗುವಳು  ದಮನಿಸಿದರೆ ಧರೆಯಾಗುವಳು ಸಂಕಟವಾದರೆ ಸಿಂಧೂರವಾಗುವಳು  ಅವಳೇ ಸಂಸಾರದ ಕಣ್ಣಾಗಿರುವ ಹೆಣ್ಣು ಮಗಳು!  ಊರನ್ನೇ ರಕ್ಷಿಸುವ ಕಾಟೇರನನ್ನು ರಕ್ಷಿಸಿದ, ಇಂತಹ ಲಕ್ಷಣಗಳನ್ನು ಹೊಂದಿರುವ 'ವಿಜಯಲಕ್ಷ್ಮಿ' ಎಂಬ ಹೆಣ್ಣುಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಒಂದು ವರ್ಷದ ಹಿಂದಷ್ಟೆ ತೆರೆ ಕಂಡ ಕಾಟೇರ ಚಿತ್ರವು ಅಣ್ಣಾವ್ರ ಬಂಗಾರದ ಮನುಷ್ಯ ಚಿತ್ರದ ನಂತರ ಉಳುವವನೇ ಹೊಲದೊಡೆಯ ಎಂಬ ಕಿಚ್ಚಿನ ವಿಷಯದ ಮೇಲೆ ಮೂಡಿ ಬಂದು ರೈತರಿಗೆ ಭರಪೂರ ಬೆಂಬಲ ನೀಡಿ ಹೃದಯಕ್ಕೆ ಹೆಚ್ಚು ಹತ್ತಿರವಾಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿ ಕೆರಿಯರ್ ಗೆ ಸಂಗೊಳ್ಳಿ ರಾಯಣ್ಣ, ಸಾರಥಿ ಚಿತ್ರಗಳಂತೆ ಕಳಶಪ್ರಾಯವಾಯಿತು. ಅದೇ ಖುಷಿಯಲ್ಲಿ ಮುಂದೆ ಸಾಗುತ್ತಿದ್ದ ದರ್ಶನ್ ಅವರ ಪಯಣಕ್ಕೆ 11-ಜೂನ್-2024ರಂದು ಸಡನ್ ಬ್ರೇಕ್ ಬಿದ್ದಿತು. ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಹತ್ಯೆಯ ಕೇಸ್ ನಲ್ಲಿ ದರ್ಶನ್ ಮತ್ತು ಅವರ ಗ್ಯಾಂಗ್ ಅರೆಸ್ಟ್ ಆಗಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಇಡೀ ಕರ್...

ದೀಪ ಹಿರಿದಾಗಲಿ ಅಥವಾ ಕಿರಿದಾಗಲಿ, ಅದರ ಕಾರ್ಯ ಬೆಳಗುವುದು ಮಾತ್ರ!

Image
ದೀಪ ಹಿರಿದಾಗಲಿ ಅಥವಾ ಕಿರಿದಾಗಲಿ, ಅದರ ಕಾರ್ಯ ಬೆಳಗುವುದು ಮಾತ್ರ! ಸುತ್ತಲು ಕವಿದಿರುವ ಕತ್ತಲು ಎಷ್ಟೇ ಗಾಢವಾಗಿರಲಿ, ಎಷ್ಟೇ ಭಯಾನಕವಾಗಿರಲಿ ನಾವು ಒಂದು ದೀಪವನ್ನು ಹಚ್ಚಿದರೆ ಅದು ಬೆಳಗೇ ಬೆಳಗುತ್ತದೆ. ದೀಪ ಹಿರಿದಾಗಲಿ ಅಥವಾ ಕಿರಿದಾಗಲಿ ಅದು ಬೆಳಗುತ್ತದೆ, ಕತ್ತಲೆಯ ಭಯಾನಕತೆಗೆ ಹೆದರಿ ಆರಿ ಹೋಗುವುದಿಲ್ಲ. ಏಕೆಂದರೆ ದೀಪದ ಕರ್ತವ್ಯ ಅಥವಾ ಧರ್ಮ ಸದಾ ಬೆಳಕು ನೀಡುವುದು. ಹಾಗೆಯೇ ನಮ್ಮ ಜೀವನದಲ್ಲಿ ಕಷ್ಟಗಳ ಕಗ್ಗತ್ತಲು ಆವರಿಸುತ್ತದೆ, ಭಯ ತರಿಸುತ್ತದೆ, ಅತಿರೇಕವಾದಾಗ ಸಾವಿನ ದಾರಿಗೆ ಕರೆದೊಯ್ಯಲು ಯತ್ನಿಸುತ್ತದೆ. ಆದರೆ, ನಾವು ಬದುಕಲೇ ಬೇಕು, ಕಷ್ಟಗಳನ್ನು ಎದುರಿಸುತ್ತಾ ಹೋರಾಡಲೇಬೇಕು. ಏಕೆಂದರೆ ಬದುಕುವುದೇ ನಮ್ಮ ಕರ್ತವ್ಯ. ಇಂದು ನಮ್ಮ ಬಾಳಲ್ಲಿ ಕತ್ತಲು ಆವರಿಸಿ ರಾತ್ರಿಯಾಗಿರಬಹುದು, ಆದರೆ ನಾಳೆ ಬೆಳಿಗ್ಗೆಯಾಗಿ ಬೆಳಕು ಬಂದೇ ಬರುತ್ತದೆ. ಸೂರ್ಯನ ಬೆಳಕಿಲ್ಲದಿರುವಾಗ ಇರುಳಿನಲ್ಲಿ ಕಾಣುವ ಚಂದ್ರನ ಬೆಳಕು ಭರವಸೆಯ ಕಿರಣವಾಗಿ ಮತ್ತೆ ಪ್ರಖರ ಬೆಳಕು ಮೂಡುವ ವಿಶ್ವಾಸವನ್ನು ತುಂಬುತ್ತದೆ.  ಸಸ್ಯಗಳಲ್ಲಿ ಚಿಗುರುವ ಹೂವುಗಳು ಒಂದು ಹಂತವನ್ನು ತಲುಪಿದ ನಂತರ ಕಾಯಿಗೆ ಜನ್ಮ ನೀಡಲು ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತದೆ. ಇದರ ಅರ್ಥ ಹೂವು ನಾಶವಾಯಿತು ಎಂತಲೇ? ಇಲ್ಲ, ಸಸ್ಯದ ಬೆಳವಣಿಗೆಯಾಗುತ್ತಿದೆ ಎಂದು. ವಸಂತ ಕಾಲ ಸನ್ನಿಹಿತವಾದಾಗ ಮರದಿಂದ ಬಾಡಿದ ಎಲೆಗಳೆಲ್ಲಾ ಉದುರಿ ಹೊಸ ಚಿಗುರಿನ ಎಲೆಗಳು ಬೆಳೆಯುತ್ತವೆ...

ಗಾಯಗೊಂಡ ಸಿಂಹದ ಘರ್ಜನೆ ಮತ್ತಷ್ಟು ಜೋರಾಗುತ್ತಾ?

Image
ಗಾಯಗೊಂಡ ಸಿಂಹದ ಘರ್ಜನೆ ಮತ್ತಷ್ಟು ಜೋರಾಗುತ್ತಾ? 'ಒಬ್ಬ ಸಾಮಾನ್ಯ ಬಡ ಕುಟುಂಬದ ಪ್ರತಿಭಾವಂತ, ಯೋಗ್ಯವಂತ ಹುಡುಗನ ಮೇಲೆ ನಂಬಿಕೆಯಿಟ್ಟು ದೊಡ್ಡ ಸ್ಥಾನವನ್ನು ನೀಡಿದರೆ ಆತನು ಹೇಗೆ ಅದರ ಸದುಪಯೋಗ ಮಾಡಿಕೊಂಡು ಉತ್ತಮ ಕೆಲಸಗಳನ್ನು ಮಾಡುತ್ತಾನೆ ಎಂದು ನಾನು ನಿರೂಪಿಸಿದರೆ ಭವಿಷ್ಯದಲ್ಲಿ ಮತ್ತೆ ನನ್ನಂತೆಯೇ ಮತ್ತೊಬ್ಬ ಹುಡುಗನಿಗೆ ಅವಕಾಶ ನೀಡುತ್ತಾರೆ ಎಂಬ ಒಂದೇ ಒಂದು ಕಾರಣಕ್ಕಾಗಿ ನಾನು ಸಂಪೂರ್ಣ ಶ್ರಮವಹಿಸಿ ಕೆಲಸ ಮಾಡಿದೆ' ಎನ್ನುತ್ತಾರೆ ಈ ಬಾರಿಯ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ವಂಚಿತರಾದ ಪ್ರತಾಪ್ ಸಿಂಹ ಅವರು. ಯಾವುದೇ ಕ್ಷೇತ್ರದಲ್ಲಾಗಲಿ ಗಾಡ್ ಫಾದರ್ ಇಲ್ಲದವರು, ಸ್ವಂತ ಯೋಗ್ಯತೆಯ ಮೇಲೆ ಸಾಮ್ರಾಜ್ಯ ಕಟ್ಟಲು ಬಂದವರನ್ನು ಕೆಳಗೆ ಬೀಳಿಸಲು ಹಲವಾರು ಜನ ಕಾದು ಕುಳಿತಿರುತ್ತಾರೆ. ಇದೀಗ ಜನಪ್ರಿಯ, ಕ್ರಿಯಾಶೀಲ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರ ಕೇಸ್ ನಲ್ಲೂ ಇದೇ ಆಗಿದೆ. ಸ್ವಂತ ಬಲದಿಂದ ಬೆಳೆಯುತ್ತಿದ್ದ ಯುವ ನಾಯಕ ಸಿಂಹ ಅವರು ಮತ್ತಷ್ಟು ಎತ್ತರಕ್ಕೇರಿ ಚಿಕ್ಕ ಮೋದಿಯಾಗಿ ಹೊರ ಹೊಮ್ಮಿ ತಮಗೆಲ್ಲಾ ಸಂಕಟಪ್ರಾಯವಾಗುವುದು ನಮ್ಮ ರಾಜ್ಯದ ಮೂರೂ ಪ್ರಮುಖ ಪಕ್ಷಗಳ ಮುಖಂಡರಿಗೂ ಇಷ್ಟವಿರಲಿಲ್ಲವೆಂದು ಕಾಣುತ್ತದೆ. ಆದ್ದರಿಂದ ಹೀಗೆ ಅಗಾಧ ಜನಬೆಂಬಲ, ಭರಪೂರ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಹೊಂದಿರುವ ಸಿಂಹ ಅವರಿಗೆ ಟಿಕೆಟ್ ತಪ್ಪಿಸಿದ್ದಾರೆ. ಮೈಸೂರು ಮಹಾರಾಜರಾದ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ...

ಕಳಂಕದ ಹಣೆಪಟ್ಟಿಗಳೆಲ್ಲಾ ರಾಜಕಾರಣಕ್ಕೆ ಮಾತ್ರ, ಏಕೆ?

Image
ಕಳಂಕದ ಹಣೆಪಟ್ಟಿಗಳೆಲ್ಲಾ ರಾಜಕಾರಣಕ್ಕೆ ಮಾತ್ರ, ಏಕೆ? 2019ರ ಲೋಕಸಭೆ ಚುನಾವಣೆ ಮುಗಿದು, ಬಿರುಗಾಳಿ - ಸುನಾಮಿಗಳ ಆರ್ಭಟವೆಲ್ಲಾ ಕೊನೆಗೊಂಡು ಶಾಂತವಾಗಿದ್ದ ಸಮಯ. ಆದರೆ ಆ ಸಮಯದಲ್ಲೇ ಮತ್ತೆ ಬಿರುಗಾಳಿಯಂತಹ ಸುದ್ದಿ ಮೇಲೆದ್ದು ಕನ್ನಡಿಗರ ಮೇಲೆ ಅಪ್ಪಳಿಸಿತು. ಕರ್ನಾಟಕದ ಸಿಂಗಂ ಎಂದೇ ಪ್ರಖ್ಯಾತಿಯಾದ ಖಡಕ್ ಐ.ಪಿ.ಎಸ್ ಅಧಿಕಾರಿ ಅಣ್ಣಾಮಲೈ ಕುಪ್ಪುಸ್ವಾಮಿ ಅವರು ಧಿಡೀರ್ ರಾಜೀನಾಮೆ ನೀಡಿದರು. ಅವರು ತಮ್ಮ ಪೊಲೀಸ್ ಕೆಲಸದ ಕ್ಷೇತ್ರದಲ್ಲಿ ಯಾವ ರೀತಿಯ ಛಾಪು ಮೂಡಿಸಿದ್ದರೆಂದರೆ ರಾಜೀನಾಮೆ ಕೊಟ್ಟ ನಂತರವೂ ಜನರಿಗೆ ಅವರನ್ನು ಬಿಟ್ಟು ಕೊಡಲು ಇಷ್ಟವಿರಲಿಲ್ಲ. ಅವರ ಈ ನಿರ್ಧಾರದ ಬಗ್ಗೆ ಪ್ರಶ್ನಿಸಿದಾಗ 'ಸಿವಿಲ್ ಸರ್ವಿಸ್ ಅಧಿಕಾರಿಗಿಂತಲೂ ಒಬ್ಬ ಸಾಮಾನ್ಯನಿಗೆ ನಮ್ಮ ದೇಶದಲ್ಲಿ ಹೆಚ್ಚಿನ ಪವರ್ ಇದೆ, ಮುಂದಿನ ದಿನಗಳಲ್ಲಿ ಸಾಮಾನ್ಯನಾಗಿಯೇ ಹೆಚ್ಚು ಜನಸೇವೆ ಮಾಡುತ್ತೇನೆಂದು' ಉತ್ತರಿಸಿದರು. ಹಾಗಾದರೆ ಆ ಸಾಮಾನ್ಯ ವ್ಯಕ್ತಿಯ ಪವರ್ ಏನು ಎಂದು ಹುಡುಕಲು ಹೊರಟರೆ ಸಿಗುವುದು ಒಂದೇ ಚಿತ್ರಣ, ಅದುವೇ ಗುಜರಾತಿನ ರೈಲ್ವೆ ಸ್ಟೇಷನ್ ನಲ್ಲಿ ಟೀ ಮಾರುತ್ತಿದ್ದ ಒಬ್ಬ ಸಾಮಾನ್ಯ ಕುಟುಂಬದ ಚಾಯ್ ವಾಲಾ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಪ್ರಧಾನ ಮಂತ್ರಿ ಆಗಿದ್ದು! ರಾಜಕಾರಣ ಎಂದರೆ ಸಾಕು, ಮೊದಲು ನಮ್ಮ ತಲೆಗೆ ಬರುವುದೇ ಭ್ರಷ್ಟಾಚಾರ, ಶ್ರೀಮಂತರ ವ್ಯವಹಾರ, ಕುದುರೆ ವ್ಯಾಪಾರ ಹಾಗೂ ಸಿನಿಮಾಗಳಲ್ಲಿ ತೋರಿಸುವ ...

ಬೆಳಗಬೇಕಾದ ದೀಪಗಳನ್ನು ನಂದಿಸಲಾಗುತ್ತಿರುವ ಕಥೆ - ದಿ ಕೇರಳ ಸ್ಟೋರಿ

Image
ಬೆಳಗಬೇಕಾದ ದೀಪಗಳನ್ನು ನಂದಿಸಲಾಗುತ್ತಿರುವ ಕಥೆ - ದಿ ಕೇರಳ ಸ್ಟೋರಿ ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದರೂ ನಿಮ್ಮ ಮಗಳು ಮನೆಗೆ ಬಂದಿಲ್ಲವೆಂದರೆ ನಿಮಗೆ ಹೇಗಾಗುತ್ತದೆ? ಅದನ್ನು ಕಲ್ಪಿಸಿಕೊಳ್ಳೋದಕ್ಕು ನಮಗೆ ಇಷ್ಟವಿಲ್ಲ ಅಲ್ಲವೆ? ಹಾಗಿದ್ದ ಮೇಲೆ ಕಳೆದ 12 ವರ್ಷಗಳಿಂದ ಅಧಿಕೃತವಾಗಿ 32000 ಹಾಗೂ ಅನಧಿಕೃತವಾಗಿ 50000ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕೇರಳದಿಂದ ಹೊರಟ ಹೆಣ್ಣುಮಕ್ಕಳು ಅವರ ಮನೆಗೆ ಬಂದೇ ಇಲ್ಲವಲ್ಲ, ಅವರ ಮನೆಯವರ ಸ್ಥಿತಿ ಹೇಗಾಗಿರಬೇಡ! ಕೆಲವು ಸತ್ಯಗಳು ಎಷ್ಟೇ ಕಠೋರವಾಗಿದ್ದರೂ, ಅಹಿತಕರವಾಗಿದ್ದರೂ ಅದನ್ನು ಹೇಳಲೇಬೇಕಾಗುತ್ತದೆ. 'ದಿ ಕೇರಳ ಸ್ಟೋರಿ' ಸಿನಿಮಾದಲ್ಲಿ ತೋರಿಸಿರುವುದು ಅಂತಹದ್ದೇ ಒಂದು ಸತ್ಯ, 'ಲವ್ ಜಿಹಾದ್'ನ ಭೀಕರ ಸತ್ಯ. ಈ ಸಿನಿಮಾ ನೋಡಿದ ಮೇಲೆ ನನಗನಿಸಿದ್ದು ನಾನು ಎಷ್ಟು ಪುಣ್ಯವಂತೆ, ನಮ್ಮ ಸಮಾಜದಲ್ಲಿರುವ ಈ ಸಮಸ್ಯೆಯ ಬಗ್ಗೆ ತಿಳಿದುಕೊಂಡಿದ್ದೇನೆ, ಇದರಲ್ಲಿ ಸಿಲುಕಿಕೊಳ್ಳದಿರಲು ಅನಿವಾರ್ಯವಾಗಿರುವ ನಮ್ಮ ಹಿಂದೂ ಸಂಸ್ಕೃತಿ, ಸಂಸ್ಕಾರದ ಶಿಕ್ಷಣವನ್ನು ಪಡೆದುಕೊಂಡಿದ್ದೇನೆ. ಆದರೆ ಎಷ್ಟೋ ಜನ ಈಗಿನ ಹಿಂದೂ ಹೆಣ್ಣು ಮಕ್ಕಳು, ಅದರಲ್ಲೂ ಸೋ ಕಾಲ್ಡ್ ವೆಸ್ಟರ್ನೈಸ್ಡ್ ಮಾಡ್ರನೈಸ್ಡ್ ಹೆಣ್ಣು ಮಕ್ಕಳು ನಮ್ಮ ಧರ್ಮ - ಸಂಸ್ಕೃತಿಯ ಶಿಕ್ಷಣದಿಂದ ವಂಚಿತರಾಗಿ, ಧರ್ಮವೆಂದರೆ ಮೂಢನಂಬಿಕೆಗಳ ಕಂತೆಯೆಂಬ ಅಜ್ಞಾನದಿಂದ ಬದುಕುತ್ತಿದ್ದಾರೆ. ಲವ್ ಜಿಹಾದ್ ನ ಟ್ರ್ಯಾಪ್ ಗೆ ಒಳಗಾಗಿ ಚಿ...

ಆರ್.ಎಸ್.ಎಸ್ ಆಳ, ಅಗಲ, ಉದ್ದ: ಸ್ಥಾಪಕರಿಂದ

Image
ಆರ್.ಎಸ್.ಎಸ್ ಆಳ, ಅಗಲ, ಉದ್ದ: ಸ್ಥಾಪಕರಿಂದ ವ್ಯಕ್ತಿಯಾಗಲ್ಲಾಗಲಿ ಅಥವಾ ಸಂಘಟನೆಯಲ್ಲಾಗಲಿ ಯಾವಾಗ ಅದರ ಆದರ್ಶದ ಸತ್ಯಾಂಶಗಳನ್ನು ಎದುರಿಸಿ ಹೋರಾಡುವುದು ಅಸಾಧ್ಯವೆಂದು ಪ್ರತೀತವಾಗುವುದೊ ಆಗ ಸುಳ್ಳು, ಮೋಸಗಳ ಬಾಣಗಳನ್ನು ಬಳಸಿ ಅತ್ಯಂತ ಕೆಳ ಮಟ್ಟದ ಆಕ್ರಮಣವನ್ನು ಮೊದಲು ಆರಂಭಿಸುತ್ತಾರೆ. ಯಾವ ಡಾ.ಕೇಶವ ಬಲಿರಾಂ ಹೆಡಗೇವಾರ್ ಅವರಿಂದ ಸಣ್ಣದಾಗಿ ಆರಂಭವಾಗಿ ಇಂದು ದೇಶದಲ್ಲಿ 60,000ಕ್ಕೂ ಹೆಚ್ಚು ಶಾಖೆಗಳ 90 ಲಕ್ಷ ಸ್ವಯಂ ಸೇವಕರನ್ನು ಒಳಗೊಂಡ ಪ್ರಪಂಚದ ಬೃಹತ್ ಸಂಘಟನೆಯಾಗಿ ಬೆಳೆದಿದೆಯೊ ಹಾಗೂ ಸದ್ಯದಲ್ಲೇ ಶತಮಾನದ ಸಂವತ್ಸರದೆಡೆಗೆ ದಾಪುಗಾಲಿಡುತ್ತಿದೆಯೊ ಅಂತಹ ಆರ್.ಎಸ್.ಎಸ್ ನ ಬಗ್ಗೆ ಅಘೋಷಿತ ಸಂವಿಧಾನ ಪಂಡಿತರು, ಅಹಿಂದ ನಾಯಕರು ಎಂದು ಬಿಂಬಿಸಿಕೊಳ್ಳುವ ಆಗರ್ಭ ಶ್ರೀಮಂತರು, ಬುದ್ಧಿಜೀವಿಗಳು ಎಂದು ಬೋರ್ಡ್ ಹಾಕಿಕೊಳ್ಳುವ ಅಜ್ಞಾನಿಗಳು, ವೈಜ್ಞಾನಿಕರು ಎಂದು ತೋರ್ಪಡಿಸಿಕೊಳ್ಳುವ ಅವಿವೇಕಿಗಳು ಪ್ರತಿನಿತ್ಯ ತಮ್ಮ ಮನಬಂದಂತೆ ಅತರ್ಕ, ಅಸಂಬದ್ಧ, ಋಣಾತ್ಮಕ ಹೇಳಿಕೆಗಳನ್ನು ಕೊಡುತ್ತಾರೆ. ಇದನ್ನು ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಲು ಇಂದಿನ ಅಸಮರ್ಥ ವಿಪಕ್ಷಗಳ ನಡೆಯನ್ನು ಗಮನಿಸಿದರೆ ಸಾಕು! ನಮ್ಮ ಸಮರ್ಥ, ಆದರಣೀಯ, ಜಗದ್ವಿಖ್ಯಾತ, ಜಗತ್ ವಂದನೀಯ ಪ್ರಧಾನಿ ಮೋದೀಜಿ ಅವರ ಆಡಳಿತ ವೈಖರಿ, ನಾಯಕತ್ವದ ಪರಿಯನ್ನು ಎದುರಿಸಲಾಗದೆ ಅವರ ಪ್ರತೀ ಹೆಜ್ಜೆಯನ್ನೂ ಟೀಕಿಸುತ್ತಾರಲ್ಲ ಹಾಗೆ ಕೆಲವು ಅಜ್ಞಾನಿಗಳು ರಾಜಕೀಯ ಸ್ವಾರ್ಥ ಲಾಭದ ...

ಈ ದಾರಿ ನಿನ್ನೆಯದಲ್ಲ ನಾಳೆಗೆ ಮುಗಿದು ಹೋಗುವುದಿಲ್ಲ......

Image
ಈ ದಾರಿ ನಿನ್ನೆಯದಲ್ಲ ನಾಳೆಗೆ ಮುಗಿದು ಹೋಗುವುದಿಲ್ಲ......  ಜಂಬೂದ್ವೀಪ, ಭರತಖಂಡ, ಆರ್ಯವರ್ತ, ಭಾರತವರ್ಷ ಈ ನಮ್ಮ ದೇಶ. 'ಭಾರತದ ಧೂಳೇ ನನ್ನ ಸರ್ವೋಚ್ಚ ದೇವಲೋಕ', 'Who lives if India dies, who dies if India lives' (ಭಾರತ ಸತ್ತರೆ ಯಾರು ಬದುಕುವರು, ಭಾರತ ಬದುಕಿದರೆ ಯಾರು ಸಾಯುವರು) ಎಂದರು ಶ್ರೀಗುರು ಸ್ವಾಮಿ ವಿವೇಕಾನಂದರು. ಇಂತಹ ನಮ್ಮ ದೇಶದ ಮೇಲೆ ಆಗಿದ್ದು ಒಂದೆರಡು ಆಕ್ರಮಣವಲ್ಲ, ಸರಣಿ ಸರಣಿ ಭೀಕರ ಆಕ್ರಮಣಗಳು. ಮನುಕುಲದ ಇತಿಹಾಸದಲ್ಲೇ ನಮ್ಮ ದೇಶದ ಮೇಲೆ ನಡೆದಷ್ಟು ಘೋರ ದಾಳಿಗಳು ಎಲ್ಲೂ ನಡೆದಿಲ್ಲ ಎಂದು ವಿವೇಕಾನಂದರಾದಿಯಾಗಿ ಸದ್ಗುರು ಅವರ ವರೆಗಿನ ಎಲ್ಲಾ ಗುರು ವರಿಷ್ಠರು ವಿಶ್ಲೇಷಿಸಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿಯವರ ದಾಳಿಯಿಂದ ಪ್ರಪಂಚದಾದ್ಯಂತ ವಿವಿಧ ಬಗೆಯ ಸಂಸ್ಕೃತಿಗಳು ನಾಶವಾಗಿ ಹೋದವು. ಆದರೆ ಹಿಂದೂಗಳಾದ ನಾವಿನ್ನೂ ನಮ್ಮ ಸಂಸ್ಕೃತಿಯನ್ನು ಆಚರಿಸುತ್ತಿದ್ದೇವೆ. ಮನು, ವಸಿಷ್ಠ, ವಿಶ್ವಾಮಿತ್ರರಂತಹ ಪ್ರಾಚೀನ ಸಂತರು ಮರಳಿ ಭೂಮಿಗೆ ಬಂದರೂ ನಮ್ಮ ಇಂದಿನ ಸಂಸ್ಕೃತಿಯ ಮೂಲ ಸತ್ತ್ವವನ್ನು ಕಂಡು ಅವರಿಗೇನು ಆಶ್ಚರ್ಯವೆನಿಸುವುದಿಲ್ಲ.  ಒಬ್ಬ ಮನುಷ್ಯನ ಆತ್ಮ ವಿಶ್ವಾಸಕ್ಕೆ ಪೆಟ್ಟು ಬಿದ್ದರೇನೇ ಅದರಿಂದ ಸುಧಾರಿಸಿಕೊಳ್ಳುವುದು ಕಠಿಣ, ಹಾಗಿರುವಾಗ ಇಡೀ ದೇಶದ ಸಂಸ್ಕೃತಿಗೆ ಹೊಡೆತ ಬಿದ್ದರೆ ಅದರ ಸುಧಾರಣೆ ಎಷ್ಟು ಕ್ಲಿಷ್ಟಕರವಾಗಿರಬಹುದು! ನಮ್ಮ ಚೇತನವನ್ನು ಒಡೆಯಲು ನಾವ...